Sonu Nigam

‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಿಂದ Sonu Nigam ಹಾಡಿಗೆ ಗೇಟ್‌ ಪಾಸ್‌

ಕನ್ನಡ ಮತ್ತು ಕನ್ನಡಿಗರ ವಿರುದ್ಧ ಬಾಲಿವುಡ್‍ ಗಾಯಕ ಸೋನು ನಿಗಮ್‍ (Sonu Nigam) ಆಡಿದ ಅವಹೇಳನಕಾರಿ ಮಾತಿಗೆ ಕರ್ನಾಟಕದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ, ‘ಕುಲದಲ್ಲಿ ಕೀಳ್ಯಾವುದೋ’ (Kuladalli Keelyavudo) ಚಿತ್ರತಂಡವು ಚಿತ್ರಕ್ಕೆ ಸೋನು ನಿಗಮ್‍ ಹಾಡಿರುವ ‘ಮನಸ್ಸು ಹಾಡ್ತದೆ ವಯಸ್ಸು ಕಾಡ್ತದೆ…’ ಎಂಬ ಹಾಡನ್ನು ಕಿತ್ತುಹಾಕಲು ತೀರ್ಮಾನಿಸಿದೆ. ಈ ಕುರಿತು ಚಿತ್ರದ ನಿರ್ದೇಶಕ ರಾಮನಾರಾಯಣ್‍ ಮಾತನಾಡಿ, ‘ಸೋನು ನಿಗಮ್ ಅವರು ಉತ್ತಮ ಗಾಯಕರು ಎಂಬುದರಲ್ಲಿ‌ ಯಾವುದೇ ಸಂಶಯವಿಲ್ಲ. ಆದರೆ, ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕನ್ನಡದ…

Read More

ನಿರ್ಮಾಣಕ್ಕಿಳಿದ Raja Vardan; JAWA ಚೊಚ್ಚಲ ಚಿತ್ರ

ಬಾರ್ನ್ ಸ್ವಾಲೋ ಕಂಪನಿ ಎಂಬ ಹೆಸರಿನ ಸಂಸ್ಥೆಯಿಂದ JAWA ಚೊಚ್ಚಲ ಚಿತ್ರವನ್ನು ರಾಜವರ್ಧನ್‍ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ‘ಬಿಚ್ಚುಗತ್ತಿ’, ‘ಹಿರಣ್ಯ’, ‘ಗಜರಾಮ’ ಚಿತ್ರಗಳ ಮೂಲಕ ನಾಯಕನಾಗಿ ಮಿಂಚಿದ್ದರು. ಎರಡು ವರ್ಷಗಳ ಹಿಂದೆ ರಾಜವರ್ಧನ್‍ ಹಂಚಿಕೊಂಡಿದ್ದ ಕನಸು ಈಗ ನನಸಾಗಿದೆ ಎಂದೇ ಹೇಳಬಹುದು. ಬೆನ್ನು ಬೆನ್ನು ಚಿತ್ರಗಳಲ್ಲಿ ಅಭಿನಯಿಸಿದ್ದರಿಂದ ನಿರ್ಮಾಣ ಸಂಸ್ಥೆ ಸ್ವಲ್ಪ ನಿಧಾನವಾಗಿ ಆರಂಭವಾಗಿದೆ. ರಾಜವರ್ಧನ್‍ ತಮ್ಮ ನಿರ್ಮಾಣ ಸಂಸ್ಥೆ ಸಿನಿಮಾ ಮಾಡುದರ ಬಗ್ಗೆ ಪ್ರಕಟಿಸಿದ್ದಾರೆ. ತಮ್ಮ ಬಾರ್ನ್ ಸ್ವಾಲೋ ಕಂಪನಿ ಅಡಿ ‘ಜಾವಾ’ ಎಂಬ…

Read More
Priyanka Upendra

ಬಹಳ ವರ್ಷಗಳ ನಂತರ ಬಾಲಿವುಡ್‍ ಚಿತ್ರದಲ್ಲಿ Priyanka Upendra

ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಕನ್ನಡ, ತೆಲುಗು, ಬಂಗಾಲಿ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಬಾಲಿವಡ್‍ ಚಿತ್ರಗಳಲ್ಲೂ ನಟಿಸಿದ್ದಾರೆ. ಈಗಾಗಲೇ ಅವರು ‘ಮುಜೆ ಮೇರಿ ಬೀವಿ ಸೆ ಬಚಾವ್‍’, ‘ಸೌತೇಲ’, ‘ದುರ್ಗ’, ‘ಎನಿಮಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಬಹಳ ವರ್ಷಗಳ ನಂತರ ಅವರು ಬಾಲಿವುಡ್‍ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. 22 ವರ್ಷದ ಕನ್ನಡತಿ ಕರೆನ್ ಕ್ಷಿತಿ ಸುವರ್ಣ ಇದೀಗ ‘ಸೆಪ್ಟೆಂಬರ್‌ 21’ ಹೆಸರಿನ ಬಾಲಿವುಡ್‌ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು ಮೂಲದ ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ…

Read More
Kantara Chapter 1

Kantara Chapter 1: ಕಾಂತಾರ 1ಕ್ಕೆ ಜಲ ಅವಾಂತರ; ಜೂನಿಯರ್‌‌ ಆರ್ಟಿಸ್ಟ್‌ ಸಾ*ವು

ಕಾಂತಾರ ಸಿನಿಮಾ ಮಾಡಿದ ನಂತರ ರಿಷಬ್‌ ಶೆಟ್ಟಿ ಅವರ ಸ್ಟಾರ್‌ ಏನೋ ಬದಲಾಯಿತು. ಹಾಗೇ ಅವರ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆಯೂ ಹೆಚ್ಚಿತು. ಕಾಂತಾರದ ಯಶಸ್ಸಿನ ಬೆನ್ನಲ್ಲೇ ಅದರ ಪ್ರಿಕ್ವೆಲ್‌ Kantara Chapter 1 ತೆಗೆಯುವುದಾಗಿ ರಿಷಬ್‌ ಪ್ರಕಟಿಸಿದ್ದರು. ಅದರಂತೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡರು. ಆದರೆ ಎರಡನೇ ಚಿತ್ರ ನಿರ್ಮಾಣದ ವೇಳೆ ರಿಷಬ್‌ ಶೆಟ್ಟಿಗೆ ಮೇಲಿಂದ ಮೇಲೆ ತಡೆಗಳು ಬರತೊಡಗಿದವು. ಈ ಚಿತ್ರವನ್ನು ತೆಗೆಯುವ ಮುನ್ನವೇ ದೈವದ ಅಪ್ಪಣೆಯನ್ನು ರಿಷಬ್‌ ಪಡೆದಿದ್ದರು. ಇತ್ತೀಚೆಗೆ ದೈವವೊಂದು ರಿಷಬ್‌ಗೆ ಎಚ್ಚರಿಕೆಯನ್ನೂ…

Read More