‘Just Married’ ಟ್ರೇಲರ್ ಬಿಡುಗಡೆ; ಚಿತ್ರ ಆಗಸ್ಟ್ 22ರಂದು ತೆರೆಗೆ

ಅಲ್ಲಿ ಮದುವೆ ಮನೆ ವಾತಾವರಣ ನಿರ್ಮಾಣವಾಗಿತ್ತು. ಮುಂಭಾಗಲಿನಲ್ಲೇ ಮಂಗಳದ್ರವ್ಯಗಳನ್ನು ನೀಡಿ, ಮುತ್ತಿನ ಹಾರ ಹಾಕಿ ಬಂದ ಅತಿಥಿಗಳನ್ನು ಸ್ವಾಗತಿಸಲಾಯಿತು. ಹೆಣ್ಣುಮಕ್ಕಳು ಮೆಹಂದಿ ಹಾಕಿಸಿಸಕೊಂಡು ಸಂಭ್ರಮಿಸುತ್ತಿದ್ದದ್ದು ಅಲ್ಲಿ ಕಂಡು ಬಂತು. ಆದರೆ, ಅದು ಮದುವೆ ಮನೆಯಲ್ಲ. ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ. abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ನಿರ್ಮಿಸಿರುವ, ಸಿ.ಆರ್.ಬಾಬಿ ನಿರ್ದೇಶನದಲ್ಲಿ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ‘ಜಸ್ಟ್ ಮ್ಯಾರೀಡ್’ (Just Married) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ…

Read More
Rishab Shetty

ಮತ್ತೊಂದು ಪ್ಯಾನ್‍ ಇಂಡಿಯಾ ಚಿತ್ರದಲ್ಲಿ ಕ್ರಾಂತಿಕಾರಿಯಾದ Rishab Shetty

ನಟ Rishab Shetty ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕಿಂತೆ ಬೇರೆ ಭಾಷೆಯ ಚಿತ್ರಗಳನ್ನೇ ಹೆಚ್ಚು ಒಪ್ಪುತ್ತಿದ್ದಾರೆ. ಇದಕ್ಕೂ ಮೊದಲು ಅವರು ‘ಜೈ ಹನುಮಾನ್‍’ ಮತ್ತು ‘ದಿ ಪ್ರೈಡ್‍ ಆಫ್‍ ಭಾರತ್‍ – ಛತ್ರಪತಿ ಶಿವಾಜಿ ಮಹಾರಾಜ್‍’ ಎಂಬ ಪ್ಯಾನ್‍ ಇಂಡಿಯಾ ಚಿತ್ರಗಳಲ್ಲಿ ನಾಯಕನಾಗಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಆ ಚಿತ್ರಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಹೀಗಿರುವಾಗಲೇ, ರಿಷಭ್‍ ಇನ್ನೊಂದು ಪ್ಯಾನ್‍ ಇಂಡಿಯಾ ಚಿತ್ರದಲ್ಲಿ ನಾಯಕನಾಗಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗಲಿದೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ಈ…

Read More

ಅ. 2ಕ್ಕೆ ‘ಕಾಂತಾರ – ಚಾಪ್ಟರ್ 1’ ಬಿಡುಗಡೆ ಆಗೋದು ನಿಜ ಎಂದ Hombale Films

ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್‍ 1’ (Kantara Chapter 1) ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲವಾದ್ದರಿಂದ, ಚಿತ್ರವು ಅಂದುಕೊಂಡುಂತೆಯೇ ಅಕ್ಟೋಬರ್‍ 02ರಂದು ಬಿಡುಗಡೆಯಾಗುವುದು ಸಂಶಯ ಎಂಬ ಮಾತು ಇತ್ತೀಚೆಗೆ ಕೇಳಿಬಂದಿತ್ತು. ಆದರೆ, ಚಿತ್ರ ಮುಂದಕ್ಕೆ ಹೋಗುತ್ತಿರುವ ಕುರಿತು, ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಚಿತ್ರವು ಅಂದುಕೊಂಡಂತೆಯೇ ಅಕ್ಟೋಬರ್‍ 02ರಂದು ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂಸ್ ಸ್ಪಷ್ಟನೆ ನೀಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸ್ಥೆಯು, ‘ಯೋಜನೆಯಂತೆ ಎಲ್ಲವೂ ಸುಸೂತ್ರವಾಗಿ…

Read More
Kantara Chapter 1

Kantara Chapter 1: ಕಾಂತಾರ 1ಕ್ಕೆ ಜಲ ಅವಾಂತರ; ಜೂನಿಯರ್‌‌ ಆರ್ಟಿಸ್ಟ್‌ ಸಾ*ವು

ಕಾಂತಾರ ಸಿನಿಮಾ ಮಾಡಿದ ನಂತರ ರಿಷಬ್‌ ಶೆಟ್ಟಿ ಅವರ ಸ್ಟಾರ್‌ ಏನೋ ಬದಲಾಯಿತು. ಹಾಗೇ ಅವರ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆಯೂ ಹೆಚ್ಚಿತು. ಕಾಂತಾರದ ಯಶಸ್ಸಿನ ಬೆನ್ನಲ್ಲೇ ಅದರ ಪ್ರಿಕ್ವೆಲ್‌ Kantara Chapter 1 ತೆಗೆಯುವುದಾಗಿ ರಿಷಬ್‌ ಪ್ರಕಟಿಸಿದ್ದರು. ಅದರಂತೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡರು. ಆದರೆ ಎರಡನೇ ಚಿತ್ರ ನಿರ್ಮಾಣದ ವೇಳೆ ರಿಷಬ್‌ ಶೆಟ್ಟಿಗೆ ಮೇಲಿಂದ ಮೇಲೆ ತಡೆಗಳು ಬರತೊಡಗಿದವು. ಈ ಚಿತ್ರವನ್ನು ತೆಗೆಯುವ ಮುನ್ನವೇ ದೈವದ ಅಪ್ಪಣೆಯನ್ನು ರಿಷಬ್‌ ಪಡೆದಿದ್ದರು. ಇತ್ತೀಚೆಗೆ ದೈವವೊಂದು ರಿಷಬ್‌ಗೆ ಎಚ್ಚರಿಕೆಯನ್ನೂ…

Read More