
Padmagandhi; ಬ್ರಹ್ಮನ ಆಸನದಿಂದ ಪ್ರಶಸ್ತಿಗಳವರೆಗೂ… ಒಂದು ಹೂವಿನ ಸುತ್ತ
ಸುಚೇಂದ್ರ ಪ್ರಸಾದ್ (Suchendra Prasad) ನಟನೆಯ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ‘ಮಾವು ಬೇವು’, ‘ಏಕಚಕ್ರಂ’ ಚಿತ್ರಗಳ ನಂತರ ಅವರು ಇದೀಗ ‘ಪದ್ಮಗಂಧಿ’ (Padmagandhi) ಎಂಬ ಇನ್ನೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ‘ಮಾವು ಬೇವು’ ಕನ್ನಡ ಚಿತ್ರವಾದರೆ, ‘ಏಕಚಕ್ರಂ’ ಸಂಸ್ಕೃತ ಚಿತ್ರವಾಗಿತ್ತು. ಇದೀಗ ‘ಪದ್ಮಗಂಧಿ’ ಚಿತ್ರವನ್ನು ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ತಯಾರಾಗಿದೆ. ‘ಪದ್ಮಗಂಧಿ’ ಚಿತ್ರಕ್ಕೆ ನಾಗರಾಜ್ ಆಧೋನಿ ಮತ್ತು ಗಿರಿಧರ್ ದಿವಾನ್ ಛಾಯಾಗ್ರಹಣ, ನಾಗೇಶ್ ಸಂಕಲನ ಮತ್ತು ಪಳನಿ ಡಿ. ಸೇನಾಪತಿ ಸಂಗೀತವಿದೆ. ಡಾ.ಎಸ್.ಆರ್. ಲೀಲಾ…