Sanjana Anand; ನನ್ನ, ಚಂದನ್ ನಡುವೆ ಏನಿಲ್ಲ: ಸಂಜನಾ ಆನಂದ್ ಸ್ಪಷ್ಟನೆ

ಚಂದನ್ ಶೆಟ್ಟಿ (Chandan Shetty) ಅಭಿನಯದ ‘ಸೂತ್ರಧಾರಿ’ ಚಿತ್ರವು ಮೇ 09ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ‘ಡ್ಯಾಶ್’ ಎಂಬ ಜನಪ್ರಿಯ ಹಾಡಿದ್ದು, ಈ ಹಾಡಿನಲ್ಲಿ ಚಂದನ್ ಮತ್ತು ಸಂಜನಾ ಆನಂದ್ (Sanjana Anand) ಜೊತೆಯಾಗಿ ಕಾಣಿಸಿಕೊಂಡಿದ್ದರು. ಯಾವಾಗ ಈ ಚಿತ್ರದ ಹಾಡು ಮತ್ತು ಫೋಟೋಗಳು ವೈರಲ್ ಆಯಿತೋ, ಆಗ ಚಂದನ್ ಮತ್ತು ಸಂಜನಾ ಮದುವೆಯಾಗುತ್ತಿದ್ದಾರೆ, ಅವರಿಬ್ಬರ ನಿಶ್ಚಿತಾರ್ಥವೂ ಆಗಿದೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದವರು.
ಅವೆಲ್ಲವೂ ಸುಳ್ಳು:
ಆದರೆ, ಅವೆಲ್ಲವೂ ಸುಳ್ಳು ಎಂದು ಚಂದನ್ ಮತ್ತು ಸಂಜನಾ ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಡೆದ ‘ಸೂತ್ರಧಾರಿ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಚಂದನ್ ಮತ್ತು ಸಂಜನಾ, ತಮ್ಮ ನಡುವೆ ಏನಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಸಂಜನಾ, ‘ನಾನು ಮತ್ತು ಚಂದನ್ ಎಂಗೇಜ್ ಆಗುತ್ತಿದ್ದೇವೆ ಎಂದು ಕೆಲವು ದಿನಗಳಿಂದ ಗಾಳಿಸುದ್ದಿಗಳು ಕೇಳಿಬರುತ್ತಿವೆ. ನನ್ನ ಮತ್ತು ಅವರ ನಡುವೆ ಏನೂ ಇಲ್ಲ. ಅವೆಲ್ಲವೂ ಸುಳ್ಳು. ಎರಡು ವರ್ಷದ ಹಿಂದೆ ಚಿತ್ರೀಕರಣದಲ್ಲಿ ಅವರೊಟ್ಟಿಗೆ ಕೆಲಸ ಮಾಡಿದ್ದು ಬಿಟ್ಟರೆ, ಅವರನ್ನು ಭೇಟಿ ಮಾಡುತ್ತಿರುವುದು ಇದು ಮೂರನೆಯ ಸಲ. ಈ ತರಹದ ಸುದ್ದಿಗಳು ಎಲ್ಲಿಂದ ಶುರುವಾಗುತ್ತವೆ ಎಂದು ಗೊತ್ತಾಗುವುದಿಲ್ಲ. ಈ ಸುದ್ದಿ ಕೇಳಿ ನಗು ಬಂತು. ಕೆಲವರು ತಮ್ಮನ್ನು ಎಂಗೇಜ್ಮೆಂಟ್ಗೆ ಕರೆಯಲಿಲ್ಲ ಎಂದು ಫೋನ್ ಮಾಡಿದ್ದರು. ಆಗ ಸುದ್ದಿ ಇಷ್ಟೊಂದು ದೊಡ್ಡದಾಗಿದೆ ಎಂದನಿಸಿತು. ಹಾಗಾಗಿ, ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದನಿಸಿ ಈ ವಿಷಯ ಮಾತಾಡುತ್ತಿದ್ದೇನೆ’ ಎಂದರು.

ಇನ್ನು, ತಮ್ಮ ನಡುವೆ ಏನಿಲ್ಲ ಎಂದಿರುವ ಚಂದನ್, ‘ಡ್ಯಾಶ್’ ಸಾಂಗ್ ಪೋಸ್ಟರ್ ಇಟ್ಟುಕೊಂಡು, ನಮ್ಮಿಬ್ಬರ ನಿಶ್ಚಿತಾರ್ಥ ಆಗಿದೆ ಎಂದು ಕೆಲವರು ಟ್ರೋಲ್ ಮಾಡಿದರು. ನಾವಿಬ್ಬರೂ ರಿಸೆಪ್ಷನ್ನಲ್ಲಿ ನಿಂತಿರುವ ಫೋಟೋವನ್ನು AIನಲ್ಲಿ ಸೃಷ್ಟಿ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಾಕಿದರು. ಇದಕ್ಕೆ ಸ್ಪಷ್ಟೀಕರಣ ಕೊಡುವುದಕ್ಕೆ ನಾನು, ಸಂಜನಾ ಕಾಯುತ್ತಿದ್ದೆವು. ಇಂದು ಅಂಥದ್ದೊಂದು ಅವಕಾಶ ಸಿಕ್ಕಿದೆ. ಇದನ್ನು ಇಲ್ಲೇ ಮುಗಿಸಬೇಕು ಎಂಬ ಕಾರಣಕ್ಕೆ ಈ ಕುರಿತು ಸ್ಪಷ್ಟೀಕರಣ ಕೊಟ್ಟಿದ್ದೇನೆ. ನನಗೆ ಸದ್ಯ ಮದುವೆ ಆಗುವ ಯೋಚನೆ ಇಲ್ಲ. ಸದ್ಯ ನಾನು ನನ್ನ ವೃತ್ತಿಜೀವನದ ಬಗ್ಗೆ ಹೆಚ್ಚಾಗಿ ಗಮನಹರಿಸುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಸೂತ್ರಧಾರಿ’ ಚಿತ್ರಕ್ಕೆ ಕಿರಣ್ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ನವರಸನ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಚಂದನ್ ಶೆಟ್ಟಿ, ಸಂಜನಾ ಆನಂದ್, ಅಪೂರ್ವ, ಪ್ರಶಾಂತ್ ನಟನ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣವಿದೆ.
-
ನವಿಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆ ‘Eltuu Muthaa’
ಮುಗ್ದ ಸ್ವಭಾವದ ನವೀಲನ್ನು ಕೆಣಕಿದರೆ, ಅದು ಕೆರಳಿದರೆ, ಆಗ ಕಾಳಿಂಗ ಸರ್ಪವನ್ನು ಕೊಲ್ಲುತ್ತದಂತೆ. ಇಂಥದ್ದೊಂದು ಕಥೆಯನ್ನು ಇಟ್ಟುಕೊಂಡು ಹೊಸಬರ ತಂಡವೊಂದು ಸದ್ದಿಲ್ಲದೆ ‘ಎಲ್ಟು ಮುತ್ತಾ’ (Eltuu Muthaa) ಎಂಬ ಚಿತ್ರವನ್ನು ಮಾಡಿ ಮುಗಿಸಿದೆ. ಕಳೆದ ವರ್ಷ ಪ್ರಾರಂಭವಾದ ಈ ಚಿತ್ರವು, ಇದೀಗ ಮುಕ್ತಾಯವಾಗಿದ್ದು, ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಪತ್ನಿ ಶೈಲಜಾ ವಿಜಯ್ ಕಿರಗಂದೂರು ಟೀಸರ್ ಬಿಡಗುಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ….
-
ಕಾಡಿನ ನೆಂಟರು ಕಥಾ ಸಂಕಲನ ಆಧರಿತ ಚಿತ್ರ Timmana Mottegalu; ಟ್ರೈಲರ್ ನೋಡಿದ್ರಾ..
ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಜೂನ್ 27ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಚಿತ್ರದ ತಾರಾಗಣದಲ್ಲಿ ಶೃಂಗೇರಿಯ ಕೇಶವ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ ಮತ್ತು ಪ್ರಾಣೇಶ್ ಕುಳೇಗದ್ದೆ ಇದ್ದಾರೆ. ಚಿತ್ರಕ್ಕೆ ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಕೆಂಪರಾಜು ಬಿಎಸ್ ಅವರ ಸಂಕಲನ ಮತ್ತು ಹೇಮಂತ್ ಜೋಯಿಸ್ ಅವರ ಸಂಗೀತ…
-
ಹಸು, ಹುಲಿಯಾದ ಕಥೆ ‘Maarnami’; ಟೀಸರ್ ಬಿಡುಗಡೆ
‘ಗಿಣಿರಾಮ’ ಧಾರಾವಾಹಿಯಲ್ಲಿ ಗಮನಸೆಳೆದಿದ್ದ ರಿತ್ವಿಕ್ ಮಾತಾಡ್, ಇದೀಗ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಮಾರ್ನಮಿ’ (Maarnami) ಚಿತ್ರದಲ್ಲಿ ಅವರು ನಾಯಕನಾಗಿ ನಟಿಸಿದ್ದು, ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಶೇಷವೆಂದರೆ, ಇತ್ತೀಚೆಗೆ ರಿತ್ವಿಕ್ ಹುಟ್ಟುಹಬ್ಬದಂದೇ ಟೀಸರ್ ಬಿಡುಗಡೆ ಆಗಿದೆ. ‘ಸಿಂಪಲ್’ಸ ಸುನಿ ಮತ್ತು ಕಾರ್ತಿಕ್ ಮಹೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ‘ಮಾರ್ನಮಿ’ ಚಿತ್ರವನ್ನು ಗುಣಾಧ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿ, ಶಿಲ್ಪಾ ನಿಶಾಂತ್ ನಿರ್ಮಿಸಿದ್ದಾರೆ. ರಿತ್ವಿಕ್ಗೆ ನಾಯಕಿಯಾಗಿ ಚೈತ್ರಾ ಆಚಾರ್ ನಟಿಸಿದ್ದು, ಸೋನು ಒಂದು ಪ್ರಮುಖ ಪಾತ್ರದಲ್ಲಿ…
(Sanjana Anand also addressed the rumors by saying she is not dating Chandan Shetty and asked people to stop spreading false information. Rumors surfaced suggesting Chandan Shetty was preparing to marry Sanjana Anand after his divorce from Niveditha Gowda, but Chandan Shetty has addressed these rumors as false, asking people to stop spreading misinformation.)
One thought on “Sanjana Anand; ನನ್ನ, ಚಂದನ್ ನಡುವೆ ಏನಿಲ್ಲ: ಸಂಜನಾ ಆನಂದ್ ಸ್ಪಷ್ಟನೆ”