Krishna Ajai Rao in Yuddhakaanda; ಸೌಜನ್ಯ ಪ್ರಕರಣ ಹಿಡಿದು ಬಂದ್ರಾ ಅಜಯ್‌ ರಾವ್‌..?

ಯುದ್ಧಕಾಂಡ ( Yuddhakaanda) ಎಂಬ ಟೈಟಲ್‌ನಲ್ಲಿ ಕನ್ನಡದಲ್ಲಿ ಎರಡನೇ ಸಿನಿಮಾ ಬರ್ತಾಇದೆ. 1989ರಲ್ಲಿ ರವಿ ಚಂದ್ರನ್‌ (Ravichandran) ಅವರ ನಟನೆಯಲ್ಲಿ ಕೌಟುಂಬಿಕ ವಿಚಾರ ಇಟುಕೊಂಡು ಬಂದ ಚಿತ್ರ ಅದು. ಸೋಲೆ ಇಲ್ಲ ಹಾಡು ಇಂದುಗೂ ಜನಪ್ರಿಯ ಹಾಡು. ಈಗ ಯುದ್ಧಕಾಂಡ ಎಂಬ ಟೈಟಲ್‌ ಇಟ್ಟುಕೊಂಡು ಅಜೇಯ್‌ ರಾವ್‌ (Krishna Ajai Rao) ಕರಿ ಕೋಟು ಹಾಕಿ ಸಾಮಾಜಿಕ ನ್ಯಾಯ ಕೇಳುವ ವಕೀಲನಾಗಿದ್ದಾರೆ.

ಕೃಷ್ಣನ ಲವ್‌ ಸ್ಟೋರಿ, ಮ್ಯಾರೇಜ್‌ ಸ್ಟೋರಿ ಅಂತ ಕೃಷ್ಣ ಟೈಟಲ್‌ ಜೊತೆಗೆ ಬರ್ತಿದ್ದ ಅಜಯ್‌ ರಾವ್‌ ಈ ಬಾರಿ ಮಹಾಭಾರತದಲ್ಲಿ ಪಾಂಡವರಿಗೆ ನ್ಯಾಯ ಕೊಡಿಸುವ ಕೃಷ್ಣನ ಪಾತ್ರವಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಲಾಯರ್‌ ಆಗಿ ವಾದಕ್ಕಿಳಿದು ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ಅಜಯ್‌ ರಾವ್‌ ಈ ಚಿತ್ರದಲ್ಲಿ ನಿಭಾಯಿಸಲಿದ್ದಾರೆ.

ಅಜೇಯ್ ರಾವ್ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಬೆನ್ನಿಗೆ ನಿಂತು ನ್ಯಾಯಕ್ಕೆ ಹೋರಾಡಲು ಈ ಚಿತ್ರದಲ್ಲಿ ಮುಂದಾಗಿದಾರೆ. ಹೌದು, ಯುದ್ಧಕಾಂಡ ಚಿತ್ರದ ʻಭುವಿಯಲ್ಲಿʼ ಎಂಬ ಥೀಮ್‌ ಹಾಡು ಬಿಡುಗಡೆ ಆಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಕೆಲವು ಅತ್ಯಾಚಾರ ಸಂತ್ರಸ್ತೆಯರ ಹೆಸರು ಮತ್ತು ಫೋಟೋ ಬಳಸಿದೆ ಚಿತ್ರತಂಡ. ಅದರಲ್ಲಿ ನಿರ್ಭಯ, ಡಾ. ಮೌಮಿತಾ, ಸೌಜನ್ಯ ಸೇರಿದಂತೆ ಹಲವರ ಕೇಸ್‌ಗಳ ಪ್ರಸ್ತಾಪ ಮಾಡಲಾಗಿದೆ. ಅಜಯ್‌ ರಾವ್‌ ಅವರ ಹೋಂ ಬ್ಯಾನರ್‌ನ ಹೊಸ ಸಿನಿಮಾ ‘ಯುದ್ಧಕಾಂಡ’ ಏಪ್ರಿಲ್‌ನಲ್ಲಿ ರಿಲೀಸ್ ಆಗಲಿದೆ.


ಯುದ್ಧಕಾಂಡ ಚಿತ್ರದ ಹಾಡಿನಲ್ಲಿ ಮೊದಲಿಗೆ ರಾಮಾರಣದ ಸೀತಾಪಹರಣ, ನಂತರ ಮಹಾಭಾರತದ ದ್ರೌಪದಿಯ ವಸ್ತ್ರಾಪಹರಣದ ಬಗ್ಗೆ ತೋರಿಸಲಾಗಿದೆ. ನಂತರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ನಿರ್ಭಯ, ಡಾ. ಮೌಮಿತಾ ಪತ್ರಕೆಗಳ ಸುದ್ದಿಯ ತುಣುಕು ಇದೆ. ಇದರ ಜೊತೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಮುನ್ನೆಲೆಗೆ ಬಂದ ಸೌಜನ್ಯ ಪ್ರಕರಣದ ಪ್ರಸ್ತಾಪವೂ ಇದೆ. ಸಿನಿಮಾ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಪರ ಇದೆ ಎಂಬುದು ತಿಳಿಯುತ್ತದೆ. ಆದರೆ ಸೌಜನ್ಯ ಪ್ರಕರಣದ ಕುರಿತಾಗಿಯೇ ಇದೆ ಎಂಬುದಕ್ಕೆ ಯಾವುದೇ ಮಾಹಿತಿ ಚಿತ್ರತಂಡದಿಂದ ಇಲ್ಲ.


ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಚಿ. ಸೌಜನ್ಯ ಎಂಬ ಚಿತ್ರದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪತಿ ಭುವನ್‌ ಪೊನ್ನಣ್ಣ ಮತ್ತು ಇತರ ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹರ್ಷಿಕಾ ಚಿ ಸೌಜನ್ಯ ಮೂಲಕ ನಿರ್ದೇಶಕಕ್ಕೆ ಕೈಹಾಕಿದ್ದಾರೆ. ಶಾಲೆ ಹುಡುಗಿ ಕಂಡುಬರುವ ಪೋಸ್ಟರ್‌ ಬಿಡುಗಡೆ ಮಾಡಿ ಸುದ್ದಿ ಹಂಚಿಕೊಂಡಿದ್ದರು.

ಯುದ್ಧಕಾಂಡ ‘ಕೆಜಿಎಫ್’ ಖ್ಯಾತಿಯ ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ ಹಾಗೂ ನಾಗಾಭರಣ ಸೇರಿದಂತೆ ಹಲವು ಖ್ಯಾತ ಕಲಾವಿದರ ತಾರಾಗಣವಿದೆ.

(Ajay Rao, who has previously appeared in films with titles like Krishna’s Love Story and Marriage Story, is now set to portray Krishna in a different light—one where he fights for justice for the Pandavas in Mahabharata. In this film, Ajay Rao takes on the role of a lawyer, advocating for justice in the courtroom.

In Yuddhakaanda, Ajay Rao stands by the side of rape survivors and fights for their justice. The film’s recently released theme song, Bhuviyalli, has gained national attention as it features the names and photos of real-life rape victims, including Nirbhaya, Dr. Moumita, and Soujanya, among others.

Ajay Rao’s home banner is producing this film, and Yuddhakaanda is set to release in April.)

2 thoughts on “Krishna Ajai Rao in Yuddhakaanda; ಸೌಜನ್ಯ ಪ್ರಕರಣ ಹಿಡಿದು ಬಂದ್ರಾ ಅಜಯ್‌ ರಾವ್‌..?

Leave a Reply

Your email address will not be published. Required fields are marked *