Karnataka bandh tomorrow, March 22; ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ; ಬೆಳಗಿನ ಪ್ರದರ್ಶನ ರದ್ದು

ಬೆಳಗಾವಿ ಗಡಿಯಲ್ಲಿ ಮರಾಠಿ ಸಂಘಟನೆಗಳ ಪುಂಡಾಟದ ವಿರುದ್ಧ ಧ್ವನಿ ಎತ್ತಲು ಹೊರಟಿರುವ ಕನ್ನಡ ಪರ ಸಂಘಟನೆಗಳು, ಮಾರ್ಚ್ 22 ರಂದು ಕರ್ನಾಟಕ ಬಂದ್‌ (Karnataka Bandh) ಗೆ ಕರೆ ಕೊಟ್ಟಿವೆ. ಈ ಬಂದ್‍ಗೆ ಕನ್ನಡ ಚಿತ್ರರಂಗ ತನ್ನ ಬೆಂಬಲ ವ್ಯಕ್ತಪಡಿಪಡಿಸಿದೆ.

ಈ ಕುರಿತು ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce (KFCC) ಅಧ್ಯಕ್ಷ ನರಸಿಂಹಲು, ಕನ್ನಡ ಚಿತ್ರರಂಗ ಕರ್ನಾಟಕ ಬಂದ್‌ಗೆ ತನ್ನ ಬೆಂಬಲ ನೀಡುತ್ತಿದೆ, ಆದರೆ ಯಾವುದೇ ಚಿತ್ರೀಕರಣ ಬಂದ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ಬಂದ್‌ (Karnataka Bandh) ಗೆ ಚಿತ್ರರಂಗದ ಬೆಂಬಲ ಇರಲಿದೆಯಾದರೂ ಸಿನಿಮಾ ಚಿತ್ರೀಕರಣಗಳನ್ನು ನಿಲ್ಲಿಸಲಾಗುತ್ತಿಲ್ಲ. ಚಿತ್ರಪ್ರದರ್ಶಕರು ಸಹ ಬಂದ್‌ಗೆ ತಮ್ಮ ಬೆಂಬಲ ನೀಡಿದ್ದು, ಶನಿವಾರದ ಬೆಳಗಿನ ಪ್ರದರ್ಶನವನ್ನು ನಿಲ್ಲಿಸುತ್ತಿದ್ದಾರೆ. ಆದರೆ, ಮಧ್ಯಾಹ್ನದ ನಂತರ ಎಂದಿನಂತೆ ಪ್ರದರ್ಶನ ಮುಂದುವರೆಯಲಿದೆ.

ಈ ಕುರಿತು ಮಾತನಾಡಿರುವ ನರಸಿಂಹಲು, ‘ಡಾ. ರಾಜ್‍ ಅವರ ಕಾಲದಿಂದಲೂ ಕನ್ನಡ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಚಿತ್ರರಂಗ ಬೆಂಬಲ ನೀಡುತ್ತಾ ಬಂದಿದೆ. ಈಗ ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿರುವ ಈ ಬಂದ್‌ಗೆ ಚಿತ್ರರಂಗದ ಎಲ್ಲಾ ವಲಯಗಳ ಬೆಂಬಲವಿದೆ. ಚಿತ್ರೀಕರಣಕ್ಕೆ ಯಾವುದೇ ಕಡಿವಾಣ ಇರುವುದಿಲ್ಲ. ಆದರೆ, ಚಿತ್ರ ತಂಡಗಳು ಅಥವಾ ನಿರ್ಮಾಪಕರು ಸ್ವಯಂಪ್ರೇರಿತವಾಗಿ ಚಿತ್ರೀಕರಣ ಬಂದ್ ಮಾಡಿದರೆ ಅದಕ್ಕೆ ನಮ್ಮ ಸ್ವಾಗತವಿದೆ. ಕಲಾವಿದರ ಸಂಘ, ನಿರ್ಮಾಪಕರ ಸಂಘವೂ ಸಹ ಬೆಂಬಲ ವ್ಯಕ್ತಪಡಿಸಿವೆ’ ಎಂದು ಹೇಳಿದ್ದಾರೆ.

ಈ ಶುಕ್ರವಾರ ‘ನಾರಾಯಣ ನಾರಾಯಣ (Narayan Narayan )’, ‘ಬರ್ಗೆಟ್‍ ಬಸ್ಯಾ’ (Barget Basya), ‘ಯಾಳ್ವಿ’ ಮುಂತಾದ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಈ ಬಂದ್‍ನಿಂದ ಕನ್ನಡ ಚಿತ್ರಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಮಾರ್ಚ್ 22 ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ತನಕ ಬಂದ್ ಮಾಡಲು ಕನ್ನಡಪರ ಸಂಘಟನೆಗಳು ಉದ್ದೇಶಿಸಿವೆ. ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಟೌನ್‌ಹಾಲಿನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ. ಬಂದ್ ವೇಳೆ ಬಸ್, ಆಟೋ, ವಾಹನಗಳ ಸಂಚಾರ ಬಂದ್ ಆಗಬೇಕು ಎಂದು ಕನ್ನಡಪರ ಸಂಘಟನೆಗಳು ಕರೆ ನೀಡಿವೆ.

  • ಕನ್ನಡದ ಸಿನಿಮಾ KendaSampige ದಶಕದ ಸಂಭ್ರಮ

    ಕನ್ನಡದ ಸಿನಿಮಾ KendaSampige ದಶಕದ ಸಂಭ್ರಮ

    ಪ್ರತಿ ಒಬ್ಬ ಕಲಾವಿದನಿಗೆ ತನ್ನ ಸಿನಿಮಾದ ದಶಕದ ಸಂಭ್ರಮ ಎಂದರೆ ಏನೋ ಒಂದು ರೀತಿ ಸಂತೋಷ ಹಾಗೆ ನನಗೂ ಸಹ ಈ ಒಂದು ದಿನ ನಿಜಕ್ಕೂ ಬಹಳ ವಿಶೇಷದಿನ . ನನ್ನ ಸಿನಿ ಕ್ಷೇತ್ರದಲ್ಲಿ ಒಂದು ನಡಿಗೆಗೆ ಅವಕಾಶ ಮಾಡಿಕೊಟ್ಟಂತಹ ಸಿನಿಮಾ ಎಂದರೆ ಅದು ಕೆಂಡಸಂಪಿಗೆ (KendaSampige). ಈ ಒಂದು ಪಯಣ ನನ್ನ ಕನಸುಗಳಿಗೆ ಅರ್ಥವನ್ನ ನೀಡಿದೆ ಎಂದು ಸಂತೋಷವನ್ನ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಸಾಮಾನ್ಯಾವಾಗಿ ಹೊಸಬರಿಗೆ ಅವಕಾಶ ಬಹಳ ಕಡಿಮೆ ಅಂತ ಹೇಳಬಹುದು,ಅಂತದ್ರಲ್ಲಿ ನನ್ನ…

  • ಯುವ ಪ್ರತಿಭೆಗಳ “ಆಸ್ಟಿನ್ ನ ಮಹನ್ಮೌನ”(Austin Na Mahan Mouna) ಚಿತ್ರದ ಹಾಡುಗಳ ಬಿಡುಗಡೆ : ಸೆಪ್ಟಂಬರ್ 5 ಕ್ಕೆ ರಿಲೀಸ್

    ಯುವ ಪ್ರತಿಭೆಗಳ “ಆಸ್ಟಿನ್ ನ ಮಹನ್ಮೌನ”(Austin Na Mahan Mouna) ಚಿತ್ರದ ಹಾಡುಗಳ ಬಿಡುಗಡೆ : ಸೆಪ್ಟಂಬರ್ 5 ಕ್ಕೆ ರಿಲೀಸ್

    ಬೆಳ್ಳಿ ಪರದೆ ಮೇಲೆ ಮತ್ತೊಂದು ಯುವ ಪಡೆಗಳ ತಂದ ವಿಭಿನ್ನ ಶೀಷಿಕೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಿದ್ಧರಾಗಿದ್ದಾರೆ.ಯುವ ಪ್ರತಿಭೆ ವಿನಯ್ ಕುಮಾರ್ ವೈದ್ಯನಾಥನ್ ನಟಿಸಿ , ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡಿರುವಂತಹ ” ಆಸ್ಟಿನ್ ನ ಮಹನ್ಮೌನ ” (Austin Na Mahan Mouna) ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಮಲ್ಲೇಶ್ವರಂ ನ ಎಸ್. ಆರ್. ವಿ ಪ್ರೀವ್ಯೂ ಥಿಯೇಟರ್ ನಲ್ಲಿ ಯೋಜನೆ ಮಾಡಿತ್ತು. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ , ನಿರ್ದೇಶಕ ಹಾಗೂ…

  • Shivaraj Kumar ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ

    Shivaraj Kumar ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ

    ಭೈರತಿ ರಣಗಲ್‍’, ‘ಘೋಸ್ಟ್’ ಮುಂತಾದ ಚಿತ್ರಗಳಲ್ಲಿ ಗ್ಯಾಂಗ್‍ಸ್ಟರ್ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ Shivaraj Kumar, ಒಂದು ಗ್ಯಾಪ್‍ನ ನಂತರ ಒಂದು ಸಾಫ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ‘ಡ್ಯಾಡ್‍’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಮುಹೂರ್ತ ಮೈಸೂರಿನಲ್ಲಿ ನಡೆದಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಇದೊಂದು ತಂದೆ ಸೆಂಟಿಮೆಂಟ್‍ ಚಿತ್ರವಾಗಿದ್ದು, ಸಾಕಷ್ಟು ಥ್ರಿಲ್ಲಿಂಗ್‍ ಅಂಶಗಳು ಇರಲಿವೆಯಂತೆ. ಶಿವರಾಜ್‍ಕುಮಾರ್ ಈ ಚಿತ್ರದಲ್ಲಿ ವೈದ್ಯನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ‘ಗಡಿಬಿಡಿ ಕೃಷ್ಣ’ ಚಿತ್ರದಲ್ಲಿ ವೈದ್ಯರಾಗಿ ಕಾಣಿಸಿಕೊಂಡಿದ್ದ ಶಿವರಾಜ್‍ಕುಮಾರ್,…

(Karnataka Bandh 2025: What’s Open, What’s Closed & Impact on Kannada Film Industry. The Karnataka Bandh 2025 is scheduled for tomorrow, bringing potential disruptions across the state. As protests intensify, many are wondering about Karnataka bandh tomorrow—what is open, what is closed? From public transport to cinemas, here’s a comprehensive update on the bandh and how it may affect the Kannada film industry.)

Leave a Reply

Your email address will not be published. Required fields are marked *