Landlord, Jadesh Kumar Hampe, Duniya Vijay

ಹೆಸರು ‘ಲ್ಯಾಂಡ್‍ಲಾರ್ಡ್’; ಆದರೆ ಇದು ಬಡವರ ಕಥೆ

‘ದುನಿಯಾ’ ವಿಜಯ್‍ ಅಭಿನಯದ ‘ಲ್ಯಾಂಡ್‍ಲಾರ್ಡ್’ ಚಿತ್ರದ ಮೂರನೇ ಹಂತದ ಚಿತ್ರೀಕರಣ ಇದೀಗ ಪ್ರಾರಂಭವಾಗಿದೆ. ನೆಲಮಂಗಲದ ಬಳಿ ಇರುವ ಬರದಿ ಬೆಟ್ಟದಲ್ಲಿ ‘ಲ್ಯಾಂಡ್‍ ಲಾರ್ಡ್’ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿ ಬೆಟ್ಟದ ಕೆಳಗೆ ಜಾತ್ರೆಯ ಸೆಟ್ ನಿರ್ಮಾಣ ಮಾಡಲಾಗಿದೆ. ಸೋಮವಾರ ಚಿತ್ರೀಕರಣದ ಸ್ಥಳದಲ್ಲೇ ವಿಜಯ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ‘ಲ್ಯಾಂಡ್‍ ಲಾರ್ಡ್’ ಚಿತ್ರದ ಕುರಿತು ಮಾತನಾಡುವ ವಿಜಯ್‍, ‘ನನಗೆ ಬುದ್ಧಿ ಬಂದಾಗ ನಮ್ಮೂರಲ್ಲಿ ಕರೆಂಟ್‍ ಇರಲಿಲ್ಲ. ಬುಡ್ಡಿದೀಪದಲ್ಲಿ ನಾವೆಲ್ಲರೂ ಓದಿ ಬೆಳೆದವರು. ಜಾತಿ, ಧರ್ಮ ಭೇದ-ಭಾವ ಇಲ್ಲದೆ ಎಲ್ಲರೂ ಒಟ್ಟಿಗೆ…

Read More
Rana, Tharun Sudhir

Tharun Sudhir: ಮತ್ತೆ ಬಂದ ರಾಣ; ತರುಣ್‍ ಸುಧೀರ್ ನಿರ್ಮಾಣದ ಚಿತ್ರಕ್ಕೆ ನಾಯಕ

‘ಏಕ್ ಲವ್‍ ಯಾ’ ಚಿತ್ರದಲ್ಲಿ ನಾಯಕನಾಗಿದ್ದ ರಕ್ಷಿತಾ ಪ್ರೇಮ್‍ ಸಹೋದರ ರಾಣ, ಆ ನಂತರ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ವಿಜಯ್‍ ಈಶ್ವರ್ ನಿರ್ದೇಶನದ ಚಿತ್ರವೊಂದರಲ್ಲಿ ಅವರು ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಚಿತ್ರ ಇದುವರೆಗೂ ಶುರುವಾಗಿಲ್ಲ. ಹೀಗಿರುವಾಗಲೇ, ರಾಣ ಹೊಸ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಬಾರಿ ರಾಣ, ತರುಣ್‍ ಸುಧೀರ್‍ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ‘ಕಾಟೇರ’ ಚಿತ್ರದ ನಂತರ ತರುಣ್‍ ಸುಧೀರ್‍, ಆಟ್ಲಾಂಟ ನಾಗೇಂದ್ರ ಅವರೊಂದಿಗೆ ಸೇರಿ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಘೋಷಣೆ ಕಳೆದ…

Read More
keerthy krishna plays female lead in shreyas manju starrer dildar movie

‘ದಿಲ್‍ದಾರ’ನ ಜೊತೆಯಾದ ಕೀರ್ತಿ ಕೃಷ್ಣ; ಶರಣ್‍ ಕುಟುಂಬದ ಇನ್ನೊಂದು ಪ್ರತಿಭೆ

ಶ್ರೇಯಸ್‍ ಮಂಜು ಅಭಿನಯದ ‘ವಿಷ್ಣು ಪ್ರಿಯಾ’ ಚಿತ್ರವು ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ‘ದಿಲ್‍ದಾರ್‍’ ಎಂಬ ಇನ್ನೊಂದು ಚಿತ್ರದಲ್ಲೂ ಶ್ರೇಯಸ್‍ ನಟಿಸುತ್ತಿದ್ದು, ಈ ಚಿತ್ರಕ್ಕೆ ಅವರಿಗೆ ನಾಯಕಿಯಾಗಿ ಕೀರ್ತಿ ಕೃಷ್ಣ ಆಯ್ಕೆಯಾಗಿದ್ದಾರೆ. ಈ ಕೀರ್ತಿ ಕೃಷ್ಣ ಯಾರು ಎಂಬ ಪ್ರಶ್ನೆ ಸಹಜ. ಕೀರ್ತಿ, ಶರಣ್‍ ಮತ್ತು ಶ್ರುತಿ ಅವರ ಸಂಬಂಧಿ. ಅವರಿಬ್ಬರ ಸಹೋದರಿ ಉಷಾ ಕೃಷ್ಣ ಅವರ ಮಗಳು ಈ ಕೀರ್ತಿ ಕೃಷ್ಣ. ‘ಸಿಂಪಲ್’ ಸುನಿ ಮುಂಬರುವ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿರುವ ಕೀರ್ತಿ,…

Read More
Nimagondu-Sihi-Suddi-Raghu-Bhat-Kavya-Shetty

Nimagondu Sihi Suddi; ಅರ್ಜುನ ಗರ್ಭಧಾರಣೆ ಮಾಡಿದಾಗ; ಮಹಾಶಿವರಾತ್ರಿಗೆ ‘ನಿಮಗೊಂದು ಸಿಹಿ ಸುದ್ದಿ’

ಯುವಕನೊಬ್ಬ ಗರ್ಭದಾರಣೆ ಮಾಡಿದಾಗ ಏನಾಗುತ್ತದೆ? ಇಂಥದ್ದೊಂದು ವಿಷಯವನ್ನಿಟ್ಟುಕೊಂಡು ರವಿ ಭಟ್‍ ಸದ್ದಿಲ್ಲದೆ ಚಿತ್ರವೊಂದನ್ನು ಮಾಡಿದ್ದಾರೆ. ಚಿತ್ರಕ್ಕೆ ‘ನಿಮಗೊಂದು ಸಿಹಿ ಸುದ್ದಿ’ ಎಂಬ ಹೆಸರನ್ನೂ ಇಟ್ಟಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಮೊದಲ ಹಂತವಾಗಿ ಚಿತ್ರದ ಶೀರ್ಷಿಕೆಯನ್ನು ಘೋಷಿಸುವ ಮೋಷನ್ ಪೋಸ್ಟರ್‍ ಬಿಡುಗಡೆ ಮಾಡಲಾಗಿದೆ. ರವಿ ಭಟ್‍ ಕಳೆದ ಕೆಲವು ವರ್ಷಗಳಿಂದ ಒಂದಿಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಅವರ ‘ನಿಮಗೊಂದು ಸಿಹಿಸುದ್ದಿ’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅವ್ಯಕ್ತ ಸಿನಿಮಾಸ್…

Read More