L2: Empuraan; ಕರ್ನಾಟಕಕ್ಕೆ ‘L2E: ಎಂಪುರಾನ್’ ಚಿತ್ರ ತಂದ ಹೊಂಬಾಳೆ ಫಿಲಂಸ್‍

ಈ ವರ್ಷದ ಬಹುನಿರೀಕ್ಷಿತ ಮಲಯಾಳಂ ಚಿತ್ರಗಳಲ್ಲಿ ಪೃಥ್ವಿರಾಜ್‍ ಸುಕುಮಾರನ್‍ ನಿರ್ದೇಶನದ ‘L2E: ಎಂಪುರಾನ್’ (L2: Empuraan) ಚಿತ್ರ ಸಹ ಒಂದು. ಮಾರ್ಚ್ 27ರಂದು ಈ ಚಿತ್ರವು ಬಿಡುಗಡೆಯಾಗುತ್ತಿದ್ದು, ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್‍ ಸಂಸ್ಥೆಯು ವಿತರಿಸುತ್ತಿದೆ. ‘L2E: ಎಂಪುರಾನ್’ ಚಿತ್ರವು 2019ರಲ್ಲಿ ಬಿಡುಗಡೆಯಾದ ‘ಲೂಸಿಫರ್‌’ ಚಿತ್ರದ ಮುಂದುವರೆದ ಭಾಗವಾಗಿದ್ದು, ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ನಟ ಪೃಥ್ವಿರಾಜ್‍ ಸುಕುಮಾರನ್‍ ಮೊದಲ ಬಾರಿಗೆ ನಿರ್ದೇಶಕರಾದರು. ಈ ಚಿತ್ರ ಯಶಸ್ವಿಯಾಗುವುದಷ್ಟೇ ಅಲ್ಲ, ತೆಲುಗಿನಲ್ಲಿ ರೀಮೇಕ್‍ ಸಹ ಆಗಿತ್ತು. ಈ ಚಿತ್ರದ ಯಶಸ್ಸಿನಿಂದ…

Read More

Mallikarjun Bande life story; ಕೊನೆಗೂ ಸಿನಿಮಾ ಆಯ್ತು ಮಲ್ಲಿಕಾರ್ಜುನ ಬಂಡೆ ಲೈಫ್‍ ಸ್ಟೋರಿ

ಕೆಲವು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಶೂಟೌಟ್‍ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ (ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ (Mallikarjun Bande) ಅವರ ಕುರಿತು ಚಿತ್ರ ನಿರ್ಮಾಣ ಮಾಡುವುದಕ್ಕೆ ಪೈಪೋಟಿಯೇ ನಡೆದಿತ್ತು. ಸುದೀಪ್‍ ಅಥವಾ ದರ್ಶನ್‍ ಅಭಿನಯದಲ್ಲಿ ‘ಬಂಡೆ’ ಎಂಬ ಚಿತ್ರ ಮಾಡುವುದಾಗಿ ಕೆಲವರು ಘೋಷಿಸಿ ಸುದ್ದಿ ಮಾಡಿದ್ದರು. ಆದರೆ, ಬಂಡೆ ಅವರ ಕಥೆ ಚಿತ್ರವಾಗಲೇ ಇಲ್ಲ. ಬಂಡೆ ನಿಧನರಾಗಿ 11 ವರ್ಷಗಳ ನಂತರ ಈಗ ಕೊನೆಗೂ ಅವರ ಕುರಿತು ಚಿತ್ರ ತಯಾರಾಗಿದೆ….

Read More

Yash; ಯಶ್ ಬಿಡುಗಡೆ ಮಾಡಲಿದ್ದಾರೆ ‘ಮನದ ಕಡಲು’ ಚಿತ್ರದ ಟ್ರೇಲರ್

ಯೋಗರಾಜ್‍ ಭಟ್‍ (Yogaraj Bhat) ನಿರ್ದೇಶನದ ‘ಮನದ ಕಡಲು’ (Manada Kadalu) ಚಿತ್ರವು ಮಾರ್ಚ್ 28ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹೂ ದುಂಬಿಯ ಕಥೆ …’, ‘ತುರ್ರಾ’, ‘ನೀಲಿ ನೀಲಿ ಕಡಲು …’  ಎಂಬ ಮೂರು ಹಾಡುಗಳು ಬಿಡುಗಡೆಯಾಗಿವೆ. ಈಗ ಚಿತ್ರದ ಟ್ರೇಲರ್‌ನ ಸರದಿ. ‘ಮನದ ಕಡಲು’ ಚಿತ್ರದ ಟ್ರೇಲರ್‌ ಅನ್ನು ಯಶ್‍ (Yash) ಬಿಡುಗಡೆ ಮಾಡುತ್ತಿದ್ದಾರೆ. ಇದೇ ಮಾರ್ಚ್ 23ರಂದು ಸಂಜೆ ಆರು ಗಂಟೆಗೆ ಲುಲು ಮಾಲ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಯಶ್‍ ಅಧಿಕೃತವಾಗಿ ಟ್ರೇಲರ್‍ ಬಿಡುಗಡೆ ಮಾಡಲಿದ್ದಾರೆ. ಅಂದು ಸಾವಿರಾರು…

Read More
V. Ravichandran, daali dhananjaya, Dhruva Sarja

Vidyapati; ಧನಂಜಯ್‍, ನಮ್ಮ ಪೀಳಿಗೆಯ ರವಿಚಂದ್ರನ್‍ ಎಂದ ಧ್ರುವ ಸರ್ಜಾ

‘ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ಧನಂಜಯ್‍, ಚಿತ್ರರಂಗದಲ್ಲಿ ದುಡಿದ ದುಡ್ಡನ್ನು ಚಿತ್ರರಂಗಕ್ಕೆ ಹಾಕುತ್ತಿದ್ದಾರೆ. ನಮ್ಮ ಪೀಳಿಗೆಯ ರವಿಚಂದ್ರನ್‍ ಅವರು. ಹೊಸಬರನ್ನು ಮುಂದಿಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಒಳ್ಳೆಯ ಮನಸ್ಸು ಮತ್ತು ವ್ಯಕ್ತಿತ್ವ ಇರುವ ವ್ಯಕ್ತಿ. ಅವರಿಗೆ ಒಳ್ಳೆಯದಾಗುತ್ತದೆ. ಏಕೆಂದರೆ, ಅವರು ಎಲ್ಲೂ ಕೃತಕವಾಗಿಲ್ಲ, ರಿಯಲ್‍ ಆಗಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು …’ ಹಾಗಂತ ಹೇಳಿದ್ದು ಧ್ರುವ ಸರ್ಜಾ (Dhruva Sarja). ಧನಂಜಯ್‍ (Dali Dhananjaya) ನಿರ್ಮಿಸಿ, ನಾಗಭೂಷಣ್‍ (Nagabhushana) ಅಭಿನಯಿಸಿರುವ ‘ವಿದ್ಯಾಪತಿ’ ಚಿತ್ರವು ಏಪ್ರಿಲ್‍ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ….

Read More